Close
  • Login
  •    
  • Home
  • About Us
    • Introduction
    • Kannadigas in Singapore
    • Our Constitution
    • History Of Constitution
    • Our Emblem
    • President's Message
    • Contact Us
  • Committee
    • Current Committee
    • Past Committee
  • Members
    • Membership List
    • New/Renew Membership application
    • Student Membership Application
  • Events/Gallery
    • Videos
    • Photos
    • Upcoming Event
    • Past Event
    • Feedback
  • Publications & Awards
    • Singara Patrike
    • Sinchana Newsletter
    • Aajeeva Sadhana Puraskara
    • Singara Puraskara

  • Start Date: 02-02-2020
  • End Date: 05-02-2020

ಪುರಂದರನಮನ ೨೦೨೦

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕನ್ನಡ ಸಂಘವು ಪುರಂದರ ದಾಸರ ಆರಾಧನೆಯನ್ನು 'ಪುರಂದರ ನಮನ ಶಾಸ್ತ್ರೀಯ ಸಂಗೀತ ಸ್ಪರ್ಧೆಯೊಂದಿಗೆ' ಆರಂಭಿಸಲಾಯಿತು. ಈ ಬಾರಿ ಕರ್ನಾಟಕ ಸಂಗೀತ ಪಿತಾಮಹರಾದ 'ಪುರಂದರ ದಾಸರು' ಮತ್ತು ಶಾಸ್ತ್ರೀಯ ಸಂಗೀತಕ್ಕೆ ತಮ್ಮ ಸೇವೆಯನ್ನು ಸಲ್ಲಿಸಿ ಅತ್ತ್ಯುನ್ನತ ಕೊಡುಗೆಯನ್ನು ಕೊಟ್ಟ 'ವ್ಯಾಸರಾಯರ' ರಚನೆಯನ್ನು ಆಧರಿಸಿಕೊಂಡು ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯು ೨ ಫೆಬ್ರವರಿ ೨೦೨೦ ರಂದು 'ವ್ಯಾಸ-ಪುರಂದರ' ಎಂಬ ಶೀರ್ಷಿಕೆಯೊಂದಿಗೆ ಸಿಂಗಪುರದ "ಲೆಂಗ್ ಕೀ ಕಮ್ಯೂನಿಟಿ ಕ್ಲಬ್" ನಲ್ಲಿ ಬಹು ವಿಜೃಂಭಣೆಯಿಂದ ನಡೆಯಿತು. ಸುಮಾರು ೧೨೦ ಸ್ಪರ್ಧಿಗಳು ಬೆಳಿಗ್ಗೆ ೮ ಗಂಟೆಯಿಂದ ಸಂಜೆ ೪ ಗಂಟೆಯವರೆಗೂ ತಮ್ಮ ತಮ್ಮ ಹಾಡುಗಾರಿಕೆಯನ್ನ 'ಹಿಂದೂಸ್ತಾನಿ' ಹಾಗೂ 'ಕರ್ನಾಟಕ" ಶೈಲಿಯಲ್ಲಿ ಪ್ರಸ್ತುತಪಡಿಸಿದರು. ೫ ಸೆಪ್ಟೆಂಬರ್ ೨೦೨೦ ರಂದು ಪುರಂದರ ದಾಸರ ಆರಾಧನೆಯನ್ನು ಸಂಘದ ಸಾಮಾಜಿಕ ಜಾಲತಾಣದಲ್ಲಿ ನಡೆಸಲಾಯಿತು.


ಕಾರ್ಯಕ್ರಮವು ಶ್ರೀಮತಿ ರಾಜೇಶ್ವರಿ ರವರ ನಿರೂಪಣೆಯಿಂದ ಪ್ರಾಂರಂಭವಾಯಿತು.'ವ್ಯಾಸ ಪುರಂದರ' ಸಂಗೀತ ಸ್ಪರ್ಧೆಯಲ್ಲಿ, ವಿವಿಧ ವಿಭಾಗಗಳ ವಿಜೇತರು ತಮ್ಮ ಬಹುಮಾನಿತ ಕೃತಿಗಳನ್ನು ಸಿಂಗಾರ ಕಲಾ ವೇದಿಕೆಯಲ್ಲಿ ಸಾದರಪಡಿಸಿದರು. ಪಿಳ್ಳಾರಿ ಗೀತೆಯ ಸಮೂಹ ಗಾಯನದ ಹೊಗರು, ಪುರಂದರ ದಾಸರಿಂದ ರಚಿಸಲ್ಪಟ್ಟ ಕರ್ನಾಟಕ ಶಾಸ್ತ್ರೀಯ ಸಂಗೀತದ ಪಾರಂಗತ ವಿನ್ಯಾಸವನ್ನು ಪ್ರಕಾಶಿಸಿತು. ಕಾರ್ಯಕ್ರಮದ ಅಥಿತಿಗಳಾಗಿ ವಿದ್ಯಾ ವಾಚಸ್ಪತಿ ಎಂದೇ ಪ್ರಸಿದ್ದರಾದ ಶ್ರೀ. ಅರಳುಮಲ್ಲಿಗೆ ಪಾರ್ಥಸಾರಥಿ ರವರು ದಾಸ ಸಾಹಿತ್ಯದ ಮಹತ್ವನ್ನು ತಿಳಿಸಿದರು.

Contact Us
Be a Member/Renew
Subscribe to Sangha Emails

Social Links

Quick Links

  • About Us
  • Committee
  • Members
  • Events/Gallery
  • Publications & Awards