ಪ್ರಸ್ತುತ covid-19 ಕಾರಣದಿಂದಾಗಿ ಸಿಂಗಾರ Online ವೇದಿಕೆ ಹಾಗೂ ಚಿಣ್ಣರ Web ಲೋಕ ಕಾರ್ಯಕ್ರಮಗಳನ್ನು ೨೮ ಜೂನ್ ೨೦೨೦ ರಂದು ಸಂಘದ ಸಾಮಾಜಿಕ ಜಾಲತಾಣದಲ್ಲಿ ನಡೆಸಲಾಯಿತು. ಸಿಂಗನ್ನಡಿಗರ ಪ್ರತಿಭೆಯನ್ನು ಪ್ರದರ್ಶಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು. ಉತ್ತಮ ಸಂಖ್ಯೆಯಲ್ಲಿ ಸದಸ್ಯರು ಹಾಗೂ ಮಕ್ಕಳು ಭಾಗವಹಿಸಿದ್ದರು. ಚಿಣ್ಣರ ವೆಬ್ ಲೋಕ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಭಾವಗೀತೆ, ಕಿರು ಕಥೆ, ಕಗ್ಗ ವಚನ, ನಗೆಹೊನಲು, ಹಾಸ್ಯ, ಸುಭಾಷಿತ, ಗಾದೆ, ನಟನೆ ಮುಂತಾದ ಆಕರ್ಷಕ ವಿಷಯಗಳನ್ನು, ಕನ್ನಡ ಕಲಿಯ ಶಿಕ್ಷಕರ ಮಾರ್ಗದರ್ಶನದಲ್ಲಿ ಹುರುಪಿನಿಂದ ಅಭ್ಯಾಸ ಮಾಡಿ ಶಿಸ್ತಿನಿಂದ ಪ್ರದರ್ಶನ ನೀಡಿದ ಸಿಂಗನ್ನಡದ ಮಕ್ಕಳ ಪ್ರತಿಭೆ ಶ್ಲಾಘನೀಯವಾದದ್ದು. ಶ್ರೀಮತಿ ಶ್ರೀವಿದ್ಯಾ ಹಾಗೂ ಶ್ರೀ ವೆಂಕಟ ರತ್ನಯ್ಯ ಅವರ ನಿರೂಪಣೆಯಿಂದ ಅನವಾದ್ಯವಾಗಿ ಮೂಡಿಬಂತು.