ಕನ್ನಡ ಸಂಘ (ಸಿಂಗಪುರ), ೧ ಮೇ ೨೦೨೦ ರಂದು, ಮೂರನೇ Webinar, “Smartphone Photography - An Introduction” ಕಾರ್ಯಕ್ರಮ ಆಯೋಜಿಸಿತ್ತು. ಈ Webinar ಅನ್ನು, ಕನ್ನಡ ಸಂಘ (ಸಿಂಗಪುರ)ದ ಹೆಮ್ಮೆಯ ಸದಸ್ಯರಾದ - ಗುರುರಾಜ್ ಉಪಾಧ್ಯೆ ಅವರು ಉತ್ತಮವಾಗಿ ನಡೆಸಿಕೊಟ್ಟರು. ಹಲವಾರು ಕಾರ್ಯಕ್ರಮಗಳ ಕ್ಷಣಗಳನ್ನು ತನ್ನ ಕ್ಯಾಮೆರಾದಲ್ಲಿ ಸುಂದರವಾಗಿ ಸೆರೆಹಿಡಿಯುವ ಅನುಭವವಿರುವ ಗುರುರಾಜ್ ಅವರು, ನಮ್ಮ ಸುತ್ತಲಿನ ಪ್ರಪಂಚವನ್ನು ಕ್ಯಾಮೆರಾ ಕಣ್ಣಿನಲ್ಲಿ ಹೇಗೆ ನೋಡಬೇಕೆಂದು ಕಲಿಸಿಕೊಟ್ಟರು.