ಪ್ರಥಮ ಬಾರಿಗೆ "ಸಿಂಗಾರ ಪಾಠಶಾಲೆ"ಯ ಅಂಗವಾಗಿ ‘ನಲಿ-ಕಲಿ’ ಶಿಬಿರವು ‘ಕನ್ನಡ ಕಲಿ’ ಕಾರ್ಯಕ್ರಮದ ಆಶ್ರಯದಲ್ಲಿ, ೨೯ ಸೆಪ್ಟೆಂಬರ್ ೨೦೧೯ ರಿಂದ ೧೩ ಅಕ್ಟೋಬರ್ ೨೦೧೯ ರವರೆಗೆ ಪ್ರತಿ ಭಾನುವಾರ ಸಂಜೆ ೩ ರಿಂದ ೬ ಗಂಟೆಗಳವರೆಗೆ ‘ಸಿಂಡ’(SINDA) ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಶ್ರೀ ರಾಮನಾಥ್ ಎ.ಚ್ ಎಸ್ ಅವರ ನಾಯಕತ್ವದಲ್ಲಿ ಸ್ವಯಂಸೇವಕರಾದ ಶ್ರೀ ವೆಂಕಟ ರತ್ನಯ್ಯ, ಶ್ರೀ ಶ್ರೀನಿವಾಸ್ ಕೆ ಜೆ, ಶ್ರೀಮತಿ ಶ್ರೀವಿದ್ಯಾ ವೆಂಕಟೇಶ್, ಶ್ರೀಮತಿ ಸ್ಮಿತಾ ಶ್ರೀನಿವಾಸ್ ಹಾಗು ಶ್ರೀ ಕಾರ್ತಿಕ್ ಗೌತಮ್ ರವರು ಶಿಕ್ಷಕರಾಗಿ ಬಹಳ ಸಮರ್ಪಕವಾಗಿ ನಡೆಸಿಕೊಟ್ಟರು. ಕನ್ನಡ ಸಂಘ (ಸಿಂಗಪುರ)ದ 'ಸಿಂಗಾರ ಪಾಠಶಾಲೆ' ಯೋಜನೆಯ ಪ್ರತಿನಿಧಿಯಾಗಿ ಶ್ರೀ ಶಿವಕುಮಾರ್ ಅವರು ಶಿಬಿರವನ್ನು ನಿಯೋಜಿಸಿ, ಶಿಕ್ಷಕರಾಗಿಯೂ ಭಾಗವಹಿಸಿದರು. ಶಿಬಿರದ ಕೊನೆಯ ದಿನ, ನೆರೆದಿದ್ದ ಶಿಕ್ಷಕ ವೃಂದ, ಸಂಘದ ಸದಸ್ಯರು ಹಾಗು ಪೋಷಕರ ಮುಂದೆ ಮಕ್ಕಳು ತಾವು ಕಲಿತು ಅಭ್ಯಸಿಸಿದ್ದ ಹಾಡು ಮತ್ತು ನಾಟಕವನ್ನು ಸಿಂಡ ಆವರಣದ ವೇದಿಕೆಯ ಮೇಲೆ ಉತ್ಸಾಹದಿಂದ ಪ್ರದರ್ಶಿಸಿದರು. ಶಿಬಿರದಲ್ಲಿ ಸಮರ್ಪಕವಾಗಿ ಪಾಲ್ಗೊಂಡು ಉಪಯೊಗ ಪಡೆದ ಮಕ್ಕಳಿಗೆ ವೇದಿಕೆಯ ಮೇಲೆ ಅಭಿನಂದನಾ ಪತ್ರಗಳನ್ನು ಶ್ರೀಮತಿ ರಶ್ಮಿ ಉದಯಕುಮಾರ್ ಹಾಗು ಶ್ರೀ ರಾಮನಾಥ್ ರವರು ನೀಡಿದರು.