ರಂದು ಸಿಂಗಾರ ವಿಹಾರ ಎಂಬ ಹೆಸರಿನೊಂದಿಗೆ ‘ನಡೆ ನುಡಿ’ಯ ವಿನೂತನ ಪ್ರಯತ್ನ ಕನ್ನಡ ಸಂಘದ ವತಿಯಿಂದ ನಡೆಯಿತು. ಶೀರ್ಷಿಕೆಯಡಿಯಲ್ಲಿ ಇದ್ದ 'ಬನ್ನಿ ನಡೆಯೋಣ', 'ತುಂಬಾ ಮಾತಾಡೋಣ' ಹಾಗೂ 'ಮೋಜು ಮಸ್ತಿ ಮಾಡೋಣ' ಎಂಬ ಸಾಲುಗಳು ಇದರ ಮುಖ್ಯ ಉದ್ದೇಶವನ್ನು ಸಾರಿ ಹೇಳುತಿದ್ದವು. ಮೋಜು, ಮಸ್ತಿಯೊಂದಿಗೆ ನಡೆಯುವ ಈ ದೈಹಿಕ ಚಟುವಟಿಕೆಯನ್ನು ಸಿಂಗಪುರದ 'ಹಂಡೆರ್ಸನ್ ವೇವ್ಸ್' (Henderson waves) ನಲ್ಲಿ ಆಯೋಜಿಸಲಾಗಿತ್ತು. ಕನ್ನಡ ಸಂಘದ ಎಲ್ಲ ಕಾರ್ಯಕ್ರಮಗಳಂತೆ ಇಲ್ಲೂ ಕೂಡ ಉತ್ಸುಕತೆಯಿಂದ ತಮ್ಮ ಹೆಸರುಗಳ್ಳನ್ನು ನೋಂದಾಯಿಸಿಕೊಂಡ ನಮ್ಮ ಸಿಂಗನ್ನಡಿಗರು ಬೆಳಿಗ್ಗೆ ೭ ಗಂಟೆಗಾಗಲೇ ಎಸ್. ಪಿ. ಜೈನ್ (S P Jain school of global management) ಆವರಣದಲ್ಲಿ ಮುಂಜಾನೆಯ ಕಲರವವನ್ನು ಶುರುಮಾಡಿದ್ದರು. ಸುಮಾರು ೪ ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ೩೫-೪೦ ಸಿಂಗನ್ನಡಿಗರು ಎಸ್. ಪಿ. ಜೈನ್ ನಿಂದ Harbour Front ವರೆಗೂ ತುಂಬಾ ವಿನೋದದಿಂದ ನಡೆದು, ಆಯೋಜಿಸಿದ ಆಟಗಳನ್ನು ಆಡಿ ಖುಷಿ ಪಟ್ಟರು.