ಕನ್ನಡ ಸಂಘ ಸಿಂಗಪುರ ಪ್ರತಿ ವರ್ಷದಂತೆ ಈ ವರ್ಷವೂ ಕೂಡ 'ಬೌಲಿಂಗ್ (ಗುಂಡು ಉರುಳಿಸುವ)' ಪಂದ್ಯವನ್ನು ೨೧ ಸೆಪ್ಟೆಂಬರ್ ೨೦೧೯ ರ ಮಧ್ಯಾಹ್ನ ೩ ಗಂಟೆಯಿಂದ ೬ ಗಂಟೆಯವರೆಗೆ 'ಸಿಂಗಾರ ಬೌಲಿಂಗ್ ಬ್ಯಾಶ್- ೨೦೧೯' ಎಂಬ ಶೀರ್ಷಿಕೆಯಡಿಯಲ್ಲಿ Tessensohn ರೋಡಿನ ಸಿವಿಲ್ ಸರ್ವಿಸ್ ಕ್ಲಬ್ ನಲ್ಲಿ ಆಯೋಜಿಸಿತ್ತು. ಈ ಬಾರಿ ಕನ್ನಡ ಸಂಘದ ಆಯೋಜಕರು ಎಲ್ಲ ಗುಂಪುಗಳಿಗೆ ಕರ್ನಾಟಕದ ಪ್ರೇಕ್ಷಣೀಯ ಬೆಟ್ಟಗಳ ಹೆಸರುಗಳನ್ನಿಟ್ಟು ಸಿಂಗನ್ನಡಿಗರಿಗೆ ಅವುಗಳ ನೆನಪಿಸುವಲ್ಲಿ ಹಾಗೂ ಪುಟಾಣಿಗಳಿಗೆ ಪರಿಚಯ ಮಾಡಿಸುವಲ್ಲಿ ಯಶಸ್ವಿಯಾದರು ಎನ್ನಬಹುದು. ವಿವಿಧ ವಿಭಾಗದಲ್ಲಿ ಗೆದ್ದ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಂತರ ಮೈಕ್ ಹಿಡಿದ ಕನ್ನಡ ಸಂಘ ಸಿಂಗಪುರದ ಅಧ್ಯಕ್ಷರಾದ ಶ್ರೀಮತಿ ರಶ್ಮಿ ಉದಯಕುಮಾರ್ ರವರು ನೆರೆದಿರುವ ಸಿಂಗನ್ನಡಿಗರಿಗೆಲ್ಲ ಹೃದ್ಯಪೂರ್ವಕ ಧನ್ಯವಾದಗಳನ್ನು ಹೇಳಿ ನವೆಂಬರ್ ನಲ್ಲಿ ನಡೆಯುವ ದೀಪೋತ್ಸವದ ಕಾರ್ಯಕ್ರಮಕ್ಕೆ ಆಮಂತ್ರಿಸುವ ಮೂಲಕ ಸಿಂಗಾರ ಬೌಲಿಂಗ್ ಬ್ಯಾಶ್ - ೨೦೧೯ ಎಂಬ ಸುಂದರ ಕೌಟುಂಬಿಕ ಪಂದ್ಯಕ್ಕೆ ತೆರೆ ಎಳೆದರು.